ಮೊನ್ನೆ ಗೆಳೆಯನೊಬ್ಬನ Mailನಲ್ಲಿ ಈ ಚಿತ್ರಗಳನ್ನು ನೋಡಿದೆ. ನನಗೇ ತಿಳಿಯದಂತೆ ಕಣ್ಣುಗಳು ಮಂಜಾಗಿದ್ದವು. ಕೆನ್ನೆಗಳೆರಡು ತಿಳಿ ಕಂಬನಿಯಿಂದ ಒದ್ದೆ ಆಗಿದ್ದವು. ನನಗೆ ಮುಂಚಿತವಾಗಿಯೆ ಈ ಬಗ್ಗೆ ತಿಳಿದಿತ್ತಾದರೂ ಸ್ಥಿತಿ ಇಷ್ಟೊಂದು ದಾರುಣವಾಗಿರುತ್ತದೆಂದು ಊಹಿಸಿರಲಿಲ್ಲ. ಒಂದೆರಡು ಕಷ್ಟಗಳೆದುರಾದರು ಜಗತ್ತೇ ಮುಳುಗಿ ಹೊಯಿತೆನೋ ಎಂಬಂತೆ ಪೇಚಾಡುವ ನಾವುಗಳಿಗೆ ಈ ಮಕ್ಕಳ ಬಗೆ ಹರಿಯದ ನಿತ್ಯ ವಿನೂತನ ಸಮಸ್ಯೆಗಳನ್ನು ಊಹಿಸಲಾಗದೆ ಹೊದದ್ದು ಆಶ್ಚರ್ಯವೆನಲ್ಲ.
ಯೋಚಿಸಿದರೆ ಇಡೀ ಸಮಾಜವನ್ನೇ ಸುಟ್ಟು ಭಸ್ಮ ಮಾಡಿ ಬಿಡಬೇಕೆನಿಸುತ್ತದೆ. ಆಧುನಿಕತೆಯ ಸಭ್ಯ ಸಮಾಜದಲ್ಲಿ ಇನ್ನು ಇಂತಹ ಅದಿನ್ನೇಷ್ಟು ವಿಕಾರಗಳಡಗಿವೆಯೋ ಯಾರಿಗೆ ಗೊತ್ತು ? ಮಕ್ಕಳನ್ನು ದೇವರ ಪ್ರತಿ ರೂಪವೆಂದು ಸಾರುವ ನಮ್ಮ ದೇಶದಲ್ಲಿ ಈ ರೀತಿ ಮಕ್ಕಳ ಶೋಷಣೆ ನಡೆಯುತ್ತಿರುವುದು ಅದೇಕೊ ಮನಸ್ಸನ್ನು ಕಲಕುತ್ತಿದೆ. ಆ ಮುಗ್ದ ಕಂಗಳಿಂದ ಸುರಿದ ಪ್ರತಿ ಕಣ್ಣೀರು ನಮ್ಮ ದೇಶದ ದೌರ್ಭಾಗ್ಯದ ಪ್ರತೀಕದಂತೆ ತೋರುತ್ತಿದೆ. ಕನಸು ಕಾಣದ ಕಣ್ಣುಗಳವು.
ಮಕ್ಕಳ ದಿನಾಚರಣೆಯ ಈ ದಿನದಂದು ಇಷ್ಟೆಲ್ಲ ಬರೆಯುವ ಔಚಿತ್ಯವಾದರೂ ಎನಿತ್ತೆಂದು ನೀವು ಕೇಳಿದರೆ, ನನ್ನಲ್ಲಿ ಯಾವ ಉತ್ತರವೂ ಇಲ್ಲ.
ಗೆಳೆಯರೆ, ನಿಮ್ಮಲ್ಲಿ ಸವಿನಯ ವಿನಂತಿ ಏನಂದರೆ, ನೀವು ಎಲ್ಲಿಯೆ ಈ ರೀತಿ ಕಷ್ಟದಲ್ಲಿ ಸಿಲುಕಿರುವ ಮಕ್ಕಳನ್ನು ಕಂಡರೆ ದಯವಿಟ್ಟು ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ನೊಂದ ಜೀವಗಳಿಗೆ ಒಂದಿಷ್ಟಾದರೂ ಸಾಂತ್ವನ ಹೇಳಿ. ಕೊನೆ ಪಕ್ಷ ಪ್ರೀತಿಯ ನೋಟವನ್ನೇ ಬೀರಿ ಸಾಕು.
ಯೋಚಿಸಿದರೆ ಇಡೀ ಸಮಾಜವನ್ನೇ ಸುಟ್ಟು ಭಸ್ಮ ಮಾಡಿ ಬಿಡಬೇಕೆನಿಸುತ್ತದೆ. ಆಧುನಿಕತೆಯ ಸಭ್ಯ ಸಮಾಜದಲ್ಲಿ ಇನ್ನು ಇಂತಹ ಅದಿನ್ನೇಷ್ಟು ವಿಕಾರಗಳಡಗಿವೆಯೋ ಯಾರಿಗೆ ಗೊತ್ತು ? ಮಕ್ಕಳನ್ನು ದೇವರ ಪ್ರತಿ ರೂಪವೆಂದು ಸಾರುವ ನಮ್ಮ ದೇಶದಲ್ಲಿ ಈ ರೀತಿ ಮಕ್ಕಳ ಶೋಷಣೆ ನಡೆಯುತ್ತಿರುವುದು ಅದೇಕೊ ಮನಸ್ಸನ್ನು ಕಲಕುತ್ತಿದೆ. ಆ ಮುಗ್ದ ಕಂಗಳಿಂದ ಸುರಿದ ಪ್ರತಿ ಕಣ್ಣೀರು ನಮ್ಮ ದೇಶದ ದೌರ್ಭಾಗ್ಯದ ಪ್ರತೀಕದಂತೆ ತೋರುತ್ತಿದೆ. ಕನಸು ಕಾಣದ ಕಣ್ಣುಗಳವು.
ಮಕ್ಕಳ ದಿನಾಚರಣೆಯ ಈ ದಿನದಂದು ಇಷ್ಟೆಲ್ಲ ಬರೆಯುವ ಔಚಿತ್ಯವಾದರೂ ಎನಿತ್ತೆಂದು ನೀವು ಕೇಳಿದರೆ, ನನ್ನಲ್ಲಿ ಯಾವ ಉತ್ತರವೂ ಇಲ್ಲ.
ಗೆಳೆಯರೆ, ನಿಮ್ಮಲ್ಲಿ ಸವಿನಯ ವಿನಂತಿ ಏನಂದರೆ, ನೀವು ಎಲ್ಲಿಯೆ ಈ ರೀತಿ ಕಷ್ಟದಲ್ಲಿ ಸಿಲುಕಿರುವ ಮಕ್ಕಳನ್ನು ಕಂಡರೆ ದಯವಿಟ್ಟು ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ನೊಂದ ಜೀವಗಳಿಗೆ ಒಂದಿಷ್ಟಾದರೂ ಸಾಂತ್ವನ ಹೇಳಿ. ಕೊನೆ ಪಕ್ಷ ಪ್ರೀತಿಯ ನೋಟವನ್ನೇ ಬೀರಿ ಸಾಕು.
No comments:
Post a Comment