Powered By Blogger

ಇಲ್ಲಿ ಕ್ಲಿಕ್ ಮಾಡಿ

Friday, November 11, 2011

ಕಲ್ಪನಾ ವಿಹಾರಿ...!

ಕಲ್ಪನೆಯ ಕಣ್ಣುಗಳಿಂದ ಕನಸು ಕಾಣುವುದು ಕಷ್ಟವೇನಲ್ಲ. ಆದರೆ ಆ ಕನಸುಗಳನ್ನು ನನಸಾಗಿಸುವುದಿರುತ್ತಲ್ಲ ಅದು ...... ಅದು ತುಂಬಾ ಕಷ್ಟಕರವಾದದ್ದು.

ಕತ್ತಲೆಯೆಂದು ಕಣ್ಣು ಮುಚ್ಚಿಕೊಂಡರೆ ಬೆಳಕು ಮೂಡಿದ್ದೂ ತಿಳಿಯುವುದಿಲ್ಲ. ಸಾಧ್ಯವಾದರೆ ದೀಪ ಹಚ್ಚ ಬೇಕು. ಇಲ್ಲವಾದರೆ ಬೆಳಕಿನ ಕಿರಣ ಹುಡುಕಲು ಪ್ರಯತ್ನಿಸಬೇಕು. ಸುಮ್ಮನಿರುವವನು ಯಾವತ್ತೂ ಅಂಧ ಕೂಪದಿಂದ ಹೊರಬರುವುದಿಲ್ಲ.

ಜಗತ್ತಿನತ್ತ ಬೀರುವ ಮನುಷ್ಯನ ದೃಷ್ಟಿಕೋನ ಎಷ್ಟು ಬೇಗ ಪರಿಪಕ್ವವಾಗುತ್ತದೆಯೊ ಅಷ್ಟೂ ಒಳ್ಳೇಯದು. ನನ್ನ ದೃಷ್ಟಿಕೋನ ಪರಿಪಕ್ವವಾಗಿದೆಯೊ ಇಲ್ವೊ ನಾನರಿಯೆ. ಆದರೂ ಕೆಲವೊಂದು ಸಂದರ್ಭಗಳಲ್ಲಿ ನಾನು ಯೋಚಿಸುವ ರೀತಿ ತುಂಬಾ ವಿಶಿಷ್ಟವಾಗಿರುತ್ತದೆಂದು ನನಗನ್ನಿಸುತ್ತದೆ.

ಬಾಗಿಲಿಲ್ಲದ ಒಂದು ಸಣ್ಣ ಕೋಣೆಯಲ್ಲಿ ಬಂಧಿಯಾಗಿರುವಾಗ ಅತಿ ಚಿಕ್ಕ ಕಿಟಕಿಯ ಮೂಲಕ ಜಗತ್ತನ್ನು ನೋಡುತ್ತಾ ಏನೇನೋ ಊಹಿಸಿಕೊಳ್ಳುತ್ತಾ..... ಕಲ್ಪಿಸಿಕೊಳ್ಳುತ್ತಾ..... ಕನಸು ಕಾಣುತ್ತಾ ಇರುವುದು ಕೂಡಾ ತುಂಬಾ ಮಜಾ ಎನಿಸುತ್ತದೆ. ಸ್ವತಂತ್ರವಾಗಿದ್ದು ಸ್ವೇಚ್ಛಾಚಾರಿಯಾಗಿ ವರ್ತಿಸುವುದಕ್ಕಿಂತ ಬಂಧನದಲ್ಲಿದ್ದು ನೈತಿಕತೆಗೆ ಹೊಣೆಯಾಗಿರುವುದು ನನಗೆ ಹೆಚ್ಚು ಹಿಡಿಸುತ್ತದೆ.

ಹಿಂದೆ ಎಲ್ಲಿಯೊ ನನ್ನನ್ನು ನಾನು 'ಕಲ್ಪನಾ ವಿಹಾರಿ' ಎಂದು ಕರೆದುಕೊಂಡಿದ್ದೆ. ಈ ದಿನ ಆ ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿತು.

No comments:

Post a Comment