(ಆರು ವರ್ಷಗಳ ಹಿಂದೆ ನಾನು ಬೀchiಯವರು ಬರೆದಿದ್ದ ಕೆಲವು ಕಥೆಗಳನ್ನು ಹಾಗೂ ಕಾದಂಬರಿಗಳನ್ನು ಓದಿದ್ದೆ. ಓದುತ್ತಿರುವಾಗ ಮನಸ್ಸಿಗೆ ಹಿಡಿಸಿದ ಸಾಲುಗಳನ್ನು Underline ಮಾಡಿ Note bookನಲ್ಲಿ ಬರೆದುಕೊಂಡಿದ್ದೆ. ಅವು ಸುಮಾರು ಐವತ್ತಕ್ಕೂ ಮೇಲ್ಪಟ್ಟು ಪುಟದಷ್ಟಿವೆ. ಅದರಿಂದ ಕೆಲವು ಆಯ್ದ ಸಾಲುಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಓದಿ ಆನಂದಿಸಿ)
* "ಸತ್ತ ವಿವೇಕಿಯ ಸಲವಾಗಿ ಅಳುವುದಕ್ಕಿಂತ ಇರುವ ಅವಿವೇಕಿಗಾಗಿಯೆ ಅಳುವುದು ಹೆಚ್ಚು ಸೂಕ್ತ."
* "ಹೆಂಡತಿಯ ಆರೋಗ್ಯವೇ ಗಂಡನ ಭಾಗ್ಯ"
* "ಕಾಯಿಲೆ ತಾನಾಗಿಯೇ ಗುಣವಾಗುವವರೆಗೂ Or ರೋಗಿಯೂ ಔಷಧದಿಂದ ಸಾಯುವವರೆಗೂ ಡಾಕ್ಟರ್ ಬೇಕೆ ಬೇಕು."
* "ಯಾವೊಬ್ಬನೂ ಹೊಗಳಿಕೆಯನ್ನು ದಾನವಾಗಿ ಕೊಡುವುದಿಲ್ಲ. ಆದಷ್ಟು ಬೇಗ ಮರಳಿ ಕೊಡು ಎಂದು ಹೇಳಿ ಕೊಡುತ್ತಾನೆ."
* "ದೂಡುವ ಮುನ್ನವೇ ದುಪ್ಪೆಂದು ಬೀಳುವವನೇ ಹೇಡಿ."
* "ಸೌಂದರ್ಯಕ್ಕಾಗಿ ಹೆಣ್ಣನ್ನು ಮೆಚ್ಚುವವನಕ್ಕಿಂತಲೂ ಬಾಟಲಿ ಚೆನ್ನಾಗಿದೆ ಎಂದು ವಿಷ ಕುಡಿಯುವವ ಹೆಚ್ಚು ಜಾಣ."
* "ಸೌಂದರ್ಯವೆಂಬುದು ಮದುವೆಯಾದ ಕೆಲ ಕ್ಷಣ ಮಾತ್ರವೇ ಹೆಂಡತಿಯ ಮುಖದಲ್ಲಿದ್ದು, ಅದಾವಾಗಲೋ ಇತರರ ಹೆಂಡಿರ ಮುಖಕ್ಕೆ ಹಾರಿ ಹೋಗುವ ಮಹಾಭೂತ."
* "ಸುಳ್ಳನ್ನು ಕೇಳಲಾರೆ ಎನ್ನುವವನು ಕಿವಿಯನ್ನು ಮುಚ್ಚಿಕೊಳ್ಳುವುದಕ್ಕಿಂತಲೂ ಬಾಯಿಯನ್ನೇ ಮುಚ್ಚಿಕೊಳ್ಳುವುದು ಒಳ್ಳೆಯದು."
* "ಇನ್ನೊಬ್ಬ ಸಾಹಿತಿ ಬರೆದುದನ್ನೆಂದೂ ಓದದವ, ಓದಿದರೂ ಮೆಚ್ಚದವ, ಮೆಚ್ಚಿದರೂ ಹೇಳದವನೇ ಸಾಹಿತಿ."
* "ಮಂತ್ರಿಗಳಿಗೆ ಮಾತನಾಡದಿರಲು, ಮಹಿಳೆಯರಿಗೆ ಸುಮ್ಮನಿರಲು ಹಾಗೂ ಸಾಹಿತಿಗಳಿಗೆ ಅಸೂಯೆ ಪಡದಿರಲು ಬಂದಿದ್ದರೆ ಶಾಂತಿ ಎಂಬುದು ಕಸದ ತಿಪ್ಪೆಯಲ್ಲೂ ಬಿದ್ದಿರುತ್ತಿತ್ತು."
(ನನ್ನ ಬ್ಲಾಗ್ ಓದುಗರು ಈ ರೀತಿಯ ಇನ್ನಷ್ಟು ಸಾಲುಗಳು ಓದಲು ಇಷ್ಟ ಪಟ್ಟರೆ ದಯವಿಟ್ಟು ಕಾಮೆಂಟ್ ಮೂಲಕ ನನಗೆ ತಿಳಿಸಿ. ಮತ್ತೊಂದು ಪೊಸ್ಟನಲ್ಲಿ ಇನ್ನಷ್ಟು ಸಾಲುಗಳನ್ನು ಪ್ರಸ್ತುತ ಪಡಿಸುತ್ತೇನೆ)
* "ಸತ್ತ ವಿವೇಕಿಯ ಸಲವಾಗಿ ಅಳುವುದಕ್ಕಿಂತ ಇರುವ ಅವಿವೇಕಿಗಾಗಿಯೆ ಅಳುವುದು ಹೆಚ್ಚು ಸೂಕ್ತ."
* "ಹೆಂಡತಿಯ ಆರೋಗ್ಯವೇ ಗಂಡನ ಭಾಗ್ಯ"
* "ಕಾಯಿಲೆ ತಾನಾಗಿಯೇ ಗುಣವಾಗುವವರೆಗೂ Or ರೋಗಿಯೂ ಔಷಧದಿಂದ ಸಾಯುವವರೆಗೂ ಡಾಕ್ಟರ್ ಬೇಕೆ ಬೇಕು."
* "ಯಾವೊಬ್ಬನೂ ಹೊಗಳಿಕೆಯನ್ನು ದಾನವಾಗಿ ಕೊಡುವುದಿಲ್ಲ. ಆದಷ್ಟು ಬೇಗ ಮರಳಿ ಕೊಡು ಎಂದು ಹೇಳಿ ಕೊಡುತ್ತಾನೆ."
* "ದೂಡುವ ಮುನ್ನವೇ ದುಪ್ಪೆಂದು ಬೀಳುವವನೇ ಹೇಡಿ."
* "ಸೌಂದರ್ಯಕ್ಕಾಗಿ ಹೆಣ್ಣನ್ನು ಮೆಚ್ಚುವವನಕ್ಕಿಂತಲೂ ಬಾಟಲಿ ಚೆನ್ನಾಗಿದೆ ಎಂದು ವಿಷ ಕುಡಿಯುವವ ಹೆಚ್ಚು ಜಾಣ."
* "ಸೌಂದರ್ಯವೆಂಬುದು ಮದುವೆಯಾದ ಕೆಲ ಕ್ಷಣ ಮಾತ್ರವೇ ಹೆಂಡತಿಯ ಮುಖದಲ್ಲಿದ್ದು, ಅದಾವಾಗಲೋ ಇತರರ ಹೆಂಡಿರ ಮುಖಕ್ಕೆ ಹಾರಿ ಹೋಗುವ ಮಹಾಭೂತ."
* "ಸುಳ್ಳನ್ನು ಕೇಳಲಾರೆ ಎನ್ನುವವನು ಕಿವಿಯನ್ನು ಮುಚ್ಚಿಕೊಳ್ಳುವುದಕ್ಕಿಂತಲೂ ಬಾಯಿಯನ್ನೇ ಮುಚ್ಚಿಕೊಳ್ಳುವುದು ಒಳ್ಳೆಯದು."
* "ಇನ್ನೊಬ್ಬ ಸಾಹಿತಿ ಬರೆದುದನ್ನೆಂದೂ ಓದದವ, ಓದಿದರೂ ಮೆಚ್ಚದವ, ಮೆಚ್ಚಿದರೂ ಹೇಳದವನೇ ಸಾಹಿತಿ."
* "ಮಂತ್ರಿಗಳಿಗೆ ಮಾತನಾಡದಿರಲು, ಮಹಿಳೆಯರಿಗೆ ಸುಮ್ಮನಿರಲು ಹಾಗೂ ಸಾಹಿತಿಗಳಿಗೆ ಅಸೂಯೆ ಪಡದಿರಲು ಬಂದಿದ್ದರೆ ಶಾಂತಿ ಎಂಬುದು ಕಸದ ತಿಪ್ಪೆಯಲ್ಲೂ ಬಿದ್ದಿರುತ್ತಿತ್ತು."
(ನನ್ನ ಬ್ಲಾಗ್ ಓದುಗರು ಈ ರೀತಿಯ ಇನ್ನಷ್ಟು ಸಾಲುಗಳು ಓದಲು ಇಷ್ಟ ಪಟ್ಟರೆ ದಯವಿಟ್ಟು ಕಾಮೆಂಟ್ ಮೂಲಕ ನನಗೆ ತಿಳಿಸಿ. ಮತ್ತೊಂದು ಪೊಸ್ಟನಲ್ಲಿ ಇನ್ನಷ್ಟು ಸಾಲುಗಳನ್ನು ಪ್ರಸ್ತುತ ಪಡಿಸುತ್ತೇನೆ)
No comments:
Post a Comment