Powered By Blogger

ಇಲ್ಲಿ ಕ್ಲಿಕ್ ಮಾಡಿ

Thursday, November 10, 2011

ಮಮತಾ ಪಾಟೀಲ್ ಗೊಂದು Thanks !

"ಪ್ರತಿಭೆ ಇಲ್ಲ ಎನ್ನುವುದಾದರೆ ಬೆಳಸಿಕೊಳ್ಳಬೇಕು. ಅದು ದೈವದತ್ತವಾದುದಲ್ಲ"

ಮೂರು ವರ್ಷಗಳ ಹಿಂದೆ ನನ್ನ ದಿನಚರಿಯಲ್ಲಿ ಬರೆದುಕೊಂಡ ಸಾಲುಗಳಿವು. ಅದೇಕೋ ಇಂದು ಎಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು. ಹೀಗಾಗಿ ಇಲ್ಲಿ ಬರೆಯುತ್ತಿದ್ದೇನೆ.

(Hyderabad Karnataka Chamber of Commerce and Industry, Gulbarga
ಸಂಘದವರು ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾನು ನಮ್ಮ ಕಾಲೇಜ್ ನ್ನು ಪ್ರತಿನಿಧಿಸುತ್ತಾ ಅದರಲ್ಲಿ ಪಾಲುಗೊಂಡಿದ್ದೆ. ಆಗಿನ ಘಟನೆ ಇದು.)

ಅವಳು ನೋಡುವುದಕ್ಕೆ ಅಷ್ಟೆನೂ ಆಕರ್ಷಕವಾಗಿಲ್ಲ. ಎತ್ತರದಲ್ಲಾಗಲಿ, ಬಣ್ಣದಲ್ಲಾಗಲಿ, ಕೊನೆಗೆ ಮುಖಚಹರೆಯೂ ಇನ್ನೊಮ್ಮೆ ನೋಡಬೇಕೆನಿಸುವಂತಿಲ್ಲ. ಆದರೆ, ತುಟಿಗಳ ಮೇಲಿನ ಮುಗುಳ್ನಗೆ......... ಸ್ಪಷ್ಟ ಉಚ್ಛಾರಣೆಯಲ್ಲಿ ನಿರರ್ಗಳವಾಗಿ ಮಾತನಾಡುವ ಅವಳ ಪ್ರತಿಭೆ.......... ತನಗೆ ವಹಿಸಿದ ಜವಾಬ್ದಾರಿಯ ಸಂಪೂರ್ಣ ಅರಿವಿರುವ ಅವಳ ಗಂಭಿರತೆ........ ಬಟ್ಟೆಗಳೇನೋ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುತ್ತಿವೆಯಾದರೂ ಅವಳ ಮಾತುಗಳಲ್ಲಿ ಧ್ವನಿಸುತ್ತಿರುವ ಸೃಜನಶೀಲತೆ...... ಇವೆಲ್ಲವೂ ತಮ್ಮದೆಯಾದ ಆಕರ್ಷಣೆಯನ್ನು ಹೊಂದಿರುವುದಂತು ಸತ್ಯ ! ಮತ್ತೆ-ಮತ್ತೆ ಅವಳತ್ತ ನೋಡುವಂತೆ ಮಾಡುತ್ತಿರುವುದಂತೂ ಸತ್ಯ !

ಸೌಂದರ್ಯ ಕಣ್ಣುಗಳನ್ನು ಕುಕ್ಕಿದರೆ ಪ್ರತಿಭೆ ಹೃದಯವನ್ನು ಗೆಲ್ಲುತ್ತದೆ. ಅಂತಹ ಪ್ರತಿಭೆ ನನ್ನಲ್ಲಿ ಏಕಿಲ್ಲವೆಂದು ಪರಿತಪಿಸುತ್ತೇನೆ. ನನಗೂ ಯಾಕೆ ಅಷ್ಟು ಸೊಗಸಾಗಿ ಮಾತನಾಡಲು ಬರುವುದಿಲ್ಲ ? ನನ್ನ ನೆತ್ತರಿನಲೇಕೆ ತುಡಿತವಿಲ್ಲ ? Stage fear ಎನ್ನುವುದನ್ನು ಗೆದ್ದಿರುವೆನೆಂದು ಆಗಾಗ ಬೀಗುವ ನನಗೇಕೆ ಇನ್ನೂ ಅಷ್ಟು ಮನೋಹರವಾಗಿ ಮಾತನಾಡಲು ಬರುವುದಿಲ್ಲ ?

ಹತ್ತು ಜನರಲ್ಲಿ ನಾವು ಎದ್ದು ಕಾಣಿಸಬೇಕೆಂದರೆ ಉಳಿದ ಒಂಭತ್ತು ಜನರಲ್ಲಿ ಇಲ್ಲದ ಏನಾದರೂ ಒಂದು ವಿಶೇಷತೆ ನಮ್ಮಲ್ಲಿ ಇರಬೇಕು. ನಮ್ಮಲ್ಲಿ ಸೌಂದರ್ಯವಾದರೂ ಇರಬೇಕು, ಇಲ್ಲವೇ ಉಳಿದವರಿಗಿಂತ ಹೆಚ್ಚು ಬೆಲೆಯುಳ್ಳ ಆಕರ್ಷಕ ಬಟ್ಟೆಯನ್ನು ತೊಟ್ಟಿರಬೇಕು. ಕೊನೆಗೆ ಏನಿಲ್ಲವೆಂದರೂ ವಾಕ್ ಚಾತುರ್ಯವಾದರೂ ಇರಬೇಕು. ಇವು ಮೂರರಿಂದಲೂ ವಂಚಿತವಾಗಿದ್ದರೆ ಸುಮ್ಮನೆ ತೆಪ್ಪಗಿದ್ದು, ಹತ್ತರಗುಂಟ ಹನ್ನೊಂದು ಎಂಬಂತಿದ್ದು ಬಿಡಬೇಕು. ಇಲ್ಲವಾದಲ್ಲಿ ನಗೆಪಾಟಲಿಗೆ ಈಡಾಗಬೇಕಾಗುತ್ತೆ. ಉಳಿದ ಒಂಭತ್ತು ಜನ ನಮ್ಮನ್ನು ಮೂರ್ಖನೆಂದುಕೊಳ್ಳುತ್ತಾರೆ.

"Self examination is the first step towards change" ಎಂಬ ಮಾತು ನೆನಪಾಗುತ್ತಿದೆ. ಬರವಣಿಗೆಯಲ್ಲಿ ಸಾಧಿಸಿದ ಸಿದ್ಧಿಯನ್ನು ಇನ್ನು ಸುಮಧುರ ಸಂಭಾಷಣೆಯಲ್ಲೂ ಸಾಧಿಸಬೇಕು.

ಇಷ್ಟೆಲ್ಲಾ ಅಂತರ್ಮಥನಕ್ಕೆ ಕಾರಣಳಾದ ಕಾರ್ಯಕ್ರಮದ ನಿರೂಪಕಿ ಮಮತಾ ಪಾಟೀಲ್ ಗೊಂದು Thanks !

1 comment:

  1. ಶಿವಶಂಕರ ಯಳವತ್ತಿ ಯವರೇ, ನಿಮ್ಮ ಈ ಆತ್ಮೀಯ ಕಾಮೆಂಟ್ ಓದಿದೆ. ನನ್ನ ಲೇಖನ ಓದಿ ಕಾಮೆಂಟ್ ಬರೆದದ್ದಕ್ಕಾಗಿ ತುಂಬಾ ಧನ್ಯವಾದಗಳು.

    ReplyDelete